ಸಹೋದರಿಯರನ್ನು ಬಲಿ ಪಡೆದ ಬಸ್ ದುರಂತ.

ಸಹೋದರಿಯರನ್ನು ಬಲಿ ಪಡೆದ ಬಸ್ ದುರಂತ.

 

 

ತುಮಕೂರು_ಶನಿವಾರ ಪಾವಗಡದಲ್ಲಿ ಸಂಭವಿಸಿದ ಬಸ್ ದುರಂತ ಅವಳಿ ಸೋದರಿಯರನ್ನು ಬಲಿ ಪಡೆಯುವ ಮೂಲಕ ಕುಟುಂಬಕ್ಕೆ ಬರಸಿಡಿಲಿನಂತೆ ಬಂದೆರಗಿದೆ ಈ ಮೂಲಕ ಬಸ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

 

 

ಇಂದು ಬೆಳಗ್ಗೆ ಸಂಭವಿಸಿದ ಬಸ್ ದುರಂತದಲ್ಲಿ ಪಾವಗಡ ತಾಲೂಕಿನ ಪೋತಗಾನಹಳ್ಳಿಯ ಸೋದರಿಯರಾದ ಅಮೂಲ್ಯ ಹಾಗೂ ಹರ್ಷಿತ ವಿದ್ಯಾಭ್ಯಾಸಕ್ಕೆಂದು ಪಾವಗಡ ಪಟ್ಟಣಕ್ಕೆ ದಿನನಿತ್ಯ ಆಗಮಿಸುತ್ತಿದ್ದರು.

 

 

ಅದರಂತೆ ಇಂದು ಸಹ ಸೋದರಿಯರು ಬಸ್ನಲ್ಲಿ ತೆರಳುವ ವೇಳೆ ಬಸ್ ಚಾಲಕನ ನಿಯಂತ್ರಣ ಪಲ್ಟಿ ಹೊಡೆದಿದ್ದು ಇಂದು ಬೆಳಗ್ಗೆ ಪೂತಗಾನಹಳ್ಳಿ ಅಮೂಲ್ಯ ಮೃತಪಟ್ಟಿದ್ದಳು .

 

 

ಗಂಭೀರವಾಗಿ ಗಾಯಗೊಂಡ ಅಮೂಲ್ಯ ಸಹೋದರಿ ಹರ್ಷಿತ ನನ್ನ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು ಆದರೆ ಕೊನೆ ಕ್ಷಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಮೂಲ್ಯ ಸಹೋದರಿ ಪೂತಗಾನಹಳ್ಳಿಯ ಹರ್ಷಿತ (21) ಸಹ ಮೃತಪಟ್ಟಿದ್ದು ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

 

 

ವರದಿ ಮಾರುತಿ ಪ್ರಸಾದ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!