ಹಿಂದುಳಿದ ವರ್ಗದ ನಾಯಕ ಪಿ ಮೂರ್ತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಗಣ್ಯರು.
ತುಮಕೂರು_ಹಿಂದುಳಿದ ವರ್ಗದ ನಾಯಕರು, ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಉದ್ಯಮಿಯಾದ ಪಿ ಮೂರ್ತಿ ಅವರ 64ನೇ ಹುಟ್ಟು ಹಬ್ಬದ ಪ್ರಯುಕ್ತ ಹಲವು ಗಣ್ಯರು ತುಮಕೂರಿನ ಕ್ಯಾತ್ಸಂದ್ರದ ಅವರ ನಿವಾಸಕ್ಕೆ ಭೇಟಿ ನೀಡಿ ಶುಭಾಶಯ ಕೋರಿದ್ದಾರೆ.
ಇದೇ ಸಂದರ್ಭದಲ್ಲಿ ಪಿ ಮೂರ್ತಿ ನಿವಾಸಕ್ಕೆ ಭೇಟಿ ನೀಡಿದ ಕನ್ನಡ ಸೇನೆಯ ಧನಿಯಾ ಕುಮಾರ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದು ಪಿ ಮೂರ್ತಿ ರವರು ಜಿಲ್ಲೆಯ ಹಿಂದುಳಿದ ವರ್ಗದ ನಾಯಕರಾಗಿದ್ದು ಹಲವು ಬಡವರ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ ಇನ್ನೂ ಅವರ 64ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವುದಾಗಿ ತಿಳಿಸಿದರು
ಸಾಹಿತಿ ಕವಿತಾಕೃಷ್ಣ ಮಾತನಾಡಿ ಪಿ ಮೂರ್ತಿ ರವರು ಗ್ರಾಮೀಣ ಪ್ರದೇಶದಿಂದ ಬಂದ ವ್ಯಕ್ತಿಯಾಗಿದ್ದು ಉತ್ತಮ ವಾಗ್ಮಿ, ಉದ್ಯಮಿಯಾಗಿ ,ಜನಸ್ನೇಹಿಯಾಗಿ, ಹಿಂದುಳಿದ ವರ್ಗದ ನಾಯಕರಾಗಿ ಸಮಾಜದಲ್ಲಿ ಸಾಕಷ್ಟು ತಮ್ಮ ಒಡನಾಟ ಹೊಂದಿರುವ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವ ಶಿಕ್ಷಣಿಕ ಆಶ್ರಮದ ಸಂಸ್ಥಾಪಕ ಅಧ್ಯಕ್ಷರಾದ ಲೇಪಾಕ್ಷ ಪ್ಪ, ತಿಪ್ಪೇಸ್ವಾಮಿ, ಕನ್ನಡ ಸೇನೆಯ ವಿಠ್ಠಲ್, ರಾಜೇಶ್, ಕೃಷ್ಣಮೂರ್ತಿ, ಸೇರಿದಂತೆ ಹಲವು ಗಣ್ಯರು ಹುಟ್ಟುಹಬ್ಬಕ್ಕೆ ಶುಭ ಕೋರಿದರು.
ವರದಿ_ ಮಾರುತಿ ಪ್ರಸಾದ್ ತುಮಕೂರು