ಶೀಘ್ರವೇ ಮುಖ್ಯಮಂತ್ರಿ ಬೊಮ್ಮಾಯಿ ಬದಲಾವಣೆ …. ನನ್ನ ಭವಿಷ್ಯ ಸುಳ್ಳಾಗದು_ಸಿ.ಎಂ .ಇಬ್ರಾಹಿಂ.

ಶೀಘ್ರವೇ ಮುಖ್ಯಮಂತ್ರಿ ಬೊಮ್ಮಾಯಿ ಬದಲಾವಣೆ …. ನನ್ನ ಭವಿಷ್ಯ ಸುಳ್ಳಾಗದು_ಸಿ.ಎಂ .ಇಬ್ರಾಹಿಂ.

 

ಇನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಶೀಘ್ರವೇ ಬದಲಾಯಿಸಲಿದ್ದಾರೆ ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಭವಿಷ್ಯ ಸುಳ್ಳಾಗದು ಎಂದು ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಇಬ್ರಾಹಿಂ ತಿಳಿಸಿದ್ದಾರೆ.

 

 

ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈಗಾಗಲೇ ಮುಖ್ಯಮಂತ್ರಿ ಬದಲಾವಣೆಯ ಕುರಿತು ಚರ್ಚೆ ನಡೆಯುತ್ತಿದ್ದು ಈಗಾಗಲೇ ಎರಡು ಹೊಸ ಹೆಸರುಗಳು ಮುನ್ನೆಲೆಗೆ ಬಂದಿದೆ ಹಾಗಾಗಿ ಶೀಘ್ರವೇ ನೂತನ ಸಿಎಂ ಬರಲಿದ್ದಾರೆ ಎಂದರು.

 

 

 

ಇನ್ನು ಮುಖ್ಯಮಂತ್ರಿ ಬೊಮ್ಮಾಯಿ ರವರು ಸಚಿವರಾಗಿದ್ದಾಗ ಒಳ್ಳೆಯ ಕೆಲಸ ಮಾಡುತ್ತಿದ್ದರು ಬಿಜೆಪಿ ಮುಳುಗುತ್ತಿರುವ ಹಡಗು ಇವತ್ತು ಬೊಮ್ಮಾಯಿ ಕರ್ಕೊಂಡ್ ಬಂದು ಸಿಎಂ ಸ್ಥಾನದಲ್ಲಿ ಕೂರಿಸಿದ್ದಾರೆ.

 

ಬೊಮ್ಮಾಯಿ ರವರು ಸಂಪುಟದ ಸಚಿವರಾಗಿದ್ದಾಗ ಉತ್ತಮ ಕೆಲಸ ನಿರ್ವಹಿಸುತ್ತಿದ್ದರು . ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂದು ಪ್ರಯತ್ನಪಟ್ಟರು ಆದರೆ ದುರದೃಷ್ಟವಶಾತ್ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದಾರೆ.

 

ಇನ್ನು ಮುಖ್ಯಮಂತ್ರಿ ಬೊಮ್ಮಾಯಿ ರವರ ಕೈಯಲ್ಲಿ ಮತಾಂತರದ ಬಿಲ್ಲು ಹಿಡಿಸಿ ಹೇಗೆ 12 ಜನ ಶಾಸಕರನ್ನು ಮುಂಬಯಿಗೆ ಕರೆದುಕೊಂಡು ಹೋದರೋ…. ವಿಡಿಯೋ ಮಾಡಿ ಅದಕ್ಕೆ ಸ್ಟೇ ತಂದರೋ ಹಾಗೆ ಮುಖ್ಯಮಂತ್ರಿಯನ್ನು ಬೊಮ್ಮಾಯಿ ಕೈಯಲ್ಲಿ ಲವ್ ಜಿಹಾದ್, ಮತಾಂತರದ ಬಿಲ್ಲು ಹಿಡಿಸಿ ಪಾಸ್ ಮಾಡಿಸಿ ಕೊನೆಗೆ ಮನೆಗೆ ಕಳುಹಿಸಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

 

 

ಇನ್ನು ಮುಖ್ಯಮಂತ್ರಿ ಬೊಮ್ಮಾಯಿ ರವರೇ ಕೇಶವಕೃಪದ ಮಾತನ್ನು ಕೇಳಬೇಡಿ ತಾವು ಬಸವ ಕೃಪಾದ ಅಧಿಪತಿಗಳು ಬಸವತತ್ವ ಅನುಸರಿಸಿ ಎಂದು ಮತಾಂತರ ನಿಷೇಧ ವಿಧೇಯಕ ವಿಷಯಕ್ಕೆ ಪರೋಕ್ಷವಾಗಿ ಸಿಎಂ ಇಬ್ರಾಹಿಂ ರವರು ಮುಖ್ಯಮಂತ್ರಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!