ದಲಿತ ವಿದ್ಯಾರ್ಥಿಗೆ ತರಗತಿಯಲ್ಲಿ ಶಿಕ್ಷಕ ಕಾಲಿನಿಂದ ಒದೆಯುತ್ತಿರುವ ವಿಡಿಯೋ ವೀಕ್ಷಿಸಿ

ದಲಿತ ವಿದ್ಯಾರ್ಥಿಗೆ ತರಗತಿಯಲ್ಲಿ ಶಿಕ್ಷಕ ಕಾಲಿನಿಂದ ಒದ್ದು ಥಳಿಸಿದ್ದಾರೆ.

 

 

ಚೆನ್ನೈ : ತರಗತಿಯಲ್ಲಿ ದಲಿತ ವಿದ್ಯಾರ್ಥಿಯೋರ್ವನಿಗೆ ಶಿಕ್ಷಕ ಥಳಿಸುತ್ತಿರುವ , ಒದೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

 

ಚಿದಂಬರಂನಲ್ಲಿರುವ ನಂದನಾರ್​ ಸರ್ಕಾರಿ ಆದಿ ದ್ರಾವಿಡರ್​ ಮಾಧ್ಯಮಿಕ ಶಾಲೆಯ ಭೌತಶಾಸ್ತ್ರ ಪ್ರಾಧ್ಯಾಪಕ ಎಂ.ಸುಬ್ರಹ್ಮಣಿಯನ್​ (56) ಎಂಬಾತನನ್ನು12ನೇ ತರಗತಿ ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿ, ಕಾಲಿನಿಂದ ಒದ್ದು ಶಿಕ್ಷಿಸಿದ ಆರೋಪದಲ್ಲಿ ಬಂಧಿಸಲಾಗಿದೆ.

 

 

ಶಿಕ್ಷಕನ ದುಷ್ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ತಮಿಳುನಾಡು ಶಿಕ್ಷಣ ಸಚಿವ ಅಂಬಿಲ್​ ಮಹೇಶ್​ ಅವರನ್ನು ಕ್ರಮಕ್ಕೆ ಒತ್ತಾಯಿಸಿದ್ದರು. ಇದೀಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಶಿಕ್ಷಕನ ವಿರುದ್ಧ ಪೊಲೀಸರು ಎಸ್​ಸಿ/ಎಸ್​ಟಿ ಕಾಯ್ದೆ 1989ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

 

ವಿದ್ಯಾರ್ಥಿ ತಾನು ಭೌತಶಾಸ್ತ್ರ ರೆಕಾರ್ಡ್​ ನೋಟ್​ಬುಕ್​ ಸಂಗ್ರಹಿಸಲು ಅನುಮತಿ ಪಡೆದಿದು ಆ ತರಗತಿಗೆ ಬಂಕ್​ ಮಾಡಿದ್ದ. ಇದರಿಂದ ಕೋಪಗೊಂಡು ಹೊಡೆದಿದ್ದಾಗಿ ಆ ಶಿಕ್ಷಕ ವಿಚಾರಣೆ ವೇಳೆ ತಿಳಿಸಿದ್ದಾನೆ.

Leave a Reply

Your email address will not be published. Required fields are marked *

You cannot copy content of this page

error: Content is protected !!