ಸಾಮಾನ್ಯರಲ್ಲಿ ಸಾಮಾನ್ಯರಂತೆ ಪ್ರೌಡ ಶಿಕ್ಷಣ ಸಚಿವ ಬಿಸಿ ನಾಗೇಶ್ ರೈಲಿನಲ್ಲಿ ಪ್ರಯಾಣ.
ಸರಳತೆಗೆ ಮತ್ತೊಂದು ಹೆಸರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಹುಟ್ಟಿನಿಂದಲೂ ಉತ್ತಮ ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿದರು ಜೀವನ ಮಾತ್ರ ಸಾಮಾನ್ಯರಂತೆ ನಡೆಸುವ ವ್ಯಕ್ತಿತ್ವ ಅವರದ್ದು.
ತಿಪಟೂರು ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿರುವ ಶಾಸಕ ಬಿಸಿ ನಾಗೇಶ್ ರವರು ಈಗ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಆದರೆ ಸರಳತೆಗೆ ಆದ್ಯತೆ ಕೊಡುವ ಸಚಿವರು ಸಾಮಾನ್ಯ ಸಾರ್ವಜನಿಕರಂತೆ ರೈಲಿನ ಟಿಕೆಟ್ ಹಿಡಿದು ರೈಲಿನಲ್ಲಿ ಪ್ರಯಾಣ ಮಾಡಲು ಟಿಕೆಟ್ ಹಿಡಿದು ರೈಲು ನಿಲ್ದಾಣದಲ್ಲಿ ಓಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಇನ್ನೂ ಈ ವಿಡಿಯೋ 2018ರ ವಿಡಿಯೋ ಎಂದು ತಿಳಿದು ಬಂದಿದೆ.
ಇನ್ನು ಬೊಮ್ಮಯೀ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆ ತುಮಕೂರಿಗೆ ಭೇಟಿ ನೀಡಿದ ವೇಳೆ ಸಚಿವರ ಆಗಮನಕ್ಕಾಗಿ ಝೀರೋ ಟ್ರಾಫಿಕ್ ಮಾಡಲಾಗಿತ್ತು ಆದರೆ ಇದನ್ನು ಗಮನಿಸಿದ ಸಚಿವರು ತನ್ನಿಂದ ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ನಾನು ಮುಂಬರುವ ದಿನದಲ್ಲಿ ತುಮಕೂರಿಗೆ ಭೇಟಿ ನೀಡುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಜೀರೋ ಟ್ರಾಫಿಕ್ದು ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ ಎಂದು ಸ್ಥಳದಲ್ಲಿದ್ದ ಪೊಲೀಸರಿಗೆ ತಿಳಿಸಿದರು.
ಅದೇನೇ ಇರಲಿ ಒಬ್ಬ ಶಾಸಕರು ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಬಳಸಿಕೊಳ್ಳದೆ ಅಪರೂಪಕ್ಕೊಮ್ಮೆ ಸಾಮಾನ್ಯರಂತೆ ಸಾರ್ವಜನಿಕರೊಂದಿಗೆ ಬೆರೆತು ರೈಲಿನಲ್ಲಿ ಪ್ರಯಾಣ ಮಾಡುವುದನ್ನು ಗಮನಿಸಿದ ಸಾರ್ವಜನಿಕರು b c ನಾಗೇಶ್ ರವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.