ಕಾಂಗ್ರೆಸ್ ಸೋಲಿಸಲು ಸಿದ್ದರಾಮಯ್ಯನವರೆ ಸಂದೇಶ ಕೊಡ್ತಾರೆ: ಸಿಟಿ ರವಿ

ಕಾಂಗ್ರೆಸ್ ಸೋಲಿಸಲು ಸಿದ್ದರಾಮಯ್ಯನವರೆ ಸಂದೇಶ ಕೊಡ್ತಾರೆ: ಸಿಟಿ ರವಿ

 

ಕಲಬುರಗಿ: ಸಿದ್ದರಾಮಯ್ಯ ಆಗಾಗ ರೆಸ್ಟ್ ಗೆ ಹೋಗ್ತಾರೆ. ಹೋಗೋವಾಗೊಮ್ಮೆ ಕಾಂಗ್ರೆಸ್ ಗೆಲ್ಲಬಾರದು ಎಂಬ ಸಂದೇಶವೊಂದನ್ನ ಕೊಟ್ಟು ಹೋಗ್ತಾರೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

 

ಕಲಬುರಗಿಯಲ್ಲಿ ಮಾತನಾಡಿದ ಅವರು, ರೆಸ್ಟಿಗೆ ಹೋಗುವ ಸಿದ್ದರಾಮಯ್ಯ ಕಾಂಗ್ರೆಸ್ ಗೆಲ್ಲಬಾರದು ಅನ್ನೋ ಸಂದೇಶ ಕೊಡ್ತಾರೆ. ಕೆಲವೊಮ್ಮೆ ನೇರವಾಗಿ ಕೆಲವೊಮ್ಮೆ ಹಿಂಬಾಲಕರ ಮೂಲಕ ಸಂದೇಶ ಕೊಟ್ಟಿದ್ದಾರೆ. ಈ ಬಾರಿ ಡಿಕೆಶಿ ನೇತೃತ್ವದಲ್ಲಿ ಯಾವ ಚುನಾವಣೆ ಗೆಲ್ಲಬಾರದು ಅನ್ನೋ ಸಂದೇಶವನ್ನು ಸಹ ಸಿದ್ದರಾಮಯ್ಯ ಕೊಟ್ಟಿದ್ದಾರೆ ಅಂತ ಹೇಳಿದರು.

 

ಈ ಹಿಂದೆ ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸೋಲಿಸುವ ಸಂದೇಶ ಕೊಟ್ಟಿದ್ರು ಎಂದು ಆಪಾದಿಸಿದ ಅವರು, ಹದಿನೆಂಟು ತಿಂಗಳಿಂದ ಕಾಂಗ್ರೆಸ್ ಅಧ್ಯಕ್ಷರಿಗೆ ತನ್ನ ವರ್ಕಿಂಗ್‌ ಟೀಮ್ ಕಟ್ಟಿಕೊಳ್ಳೋಕೆ ಆಗ್ತಿಲ್ಲ. ಇಂತವರು ಇಲ್ಲದೆ ಇರೋ ಮುಖ್ಯಮಂತ್ರಿ ಖುರ್ಚಿಗೆ ಟವೆಲ್ ಹಾಕ್ತಿದ್ದಾರೆ. ಪಕ್ಷದ ತಂಡವನ್ನೇ ಕಟ್ಟಿಕೊಳ್ಳೊಕೆ ಆಗದ ಇವರು ಹಗಲು ಕನಸು ಕಾಣುವ ನೈತಿಕತೆ ಇವರಿಗೆಲ್ಲಿದೆ ಅಂತ ಪ್ರಶ್ನಿಸಿದರು.

 

ಕಲಬುರಗಿಯಲ್ಲಿ ಬದಲಾವಣೆ ಖಚಿತ

ಕಲ್ಯಾಣ ಕರ್ನಾಟಕ ಹಿಂದೆ ಉಳಿಯಲು ಕಾರಣ ಕಾಂಗ್ರೆಸ್ ನವರು‌. ಇವರಿಗೆ ಇಲ್ಲಿನ ಜನ ತಕ್ಕ ಪಾಠ ಕಲಿಸುತ್ತಾರೆ. ಕಲಬುರಗಿಯಲ್ಲಿ ಬದಲಾವಣೆ ಖಚಿತವಾಗಿದೆ. ಬಿಜೆಪಿ ಪಾಲಿಕೆ ಗದ್ದುಗೆ ಏರೊದು ಗ್ಯಾರಂಟಿಯಾಗಿದೆ ಅಂತ ಹೇಳಿದರು. ಈ ಭಾಗದ ಅಭಿವೃದ್ಧಿ ವೇಗ ನೀಡಲು ಬಿಜೆಪಿಗೆ ಒಂದು ಅವಕಾಶ ಬೇಕು. ಬಿಜೆಪಿ ಮೂರು ಮಹಾನಗರ ಪಾಲಿಕೆಯಲ್ಲೂ ಅಧಿಕಾರಕ್ಕೆ ಬರುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಭವಿಷ್ಯ ನುಡಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!