ಸಂಕಷ್ಟದಲ್ಲಿರುವ ಮಹಿಳೆಯರಿಗೆ ದಿನಸಿ ಕಿಟ್ ವಿತರಣೆ.

 

ಕರೋನ ಸಂಕಷ್ಟದಲ್ಲಿ ರಾಜ್ಯ ಹಾಗೂ ದೇಶಾದ್ಯಂತ ಸಾರ್ವಜನಿಕರು ಸಂಕಷ್ಟಕ್ಕೀಡಾಗಿದ್ದನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸಂಕಷ್ಟಕ್ಕೀಡಾಗುವ ಕುಟುಂಬಗಳನ್ನು ಗುರುತಿಸಿ ಹಲವಾರು ಸಮಾಜ ಕಾರ್ಯಗಳನ್ನು ಸಲ್ಲಿಸುತ್ತಿದ್ದಾರೆ.

 

ಇಂಥ ಸಂದರ್ಭದಲ್ಲಿ ತುಮಕೂರಿನ ಭಗತ್ ಕ್ರಾಂತಿ ಸೇನೆ ವತಿಯಿಂದ ತುಮಕೂರಿನ ಶೆಟ್ಟಿ ಹಳ್ಳಿಯಲ್ಲಿರುವ ರೇಣುಕಾದೇವಿ ದೇವಾಲಯದಲ್ಲಿ ಮಂಗಳಮುಖಿಯರು, ದಮನಿತ ಮಹಿಳೆಯರು ಹಾಗೂ ಬಡ ಕುಟುಂಬಗಳನ್ನು ಗುರುತಿಸಿ ತುಮಕೂರಿನ ಭಗತ್ ಕ್ರಾಂತಿ ಸೇನೆ ವತಿಯಿಂದ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.

 

ಇದೇ ಸಂದರ್ಭದಲ್ಲಿ ಮಾತನಾಡಿದ ಮಂಗಳಮುಖಿಯರ ಜಿಲ್ಲಾಧ್ಯಕ್ಷರಾದ ದೀಪಿಕಾ ರವರು ಮಾತನಾಡಿ ಕರೋನ ಬಂದಾಗಿನಿಂದ ನಮ್ಮ ಜೀವನ ಸಾಕಷ್ಟು ಸಂಕಷ್ಟದಲ್ಲಿದ್ದು ಜೀವನ ನಡೆಸುವುದೇ ದುಸ್ತರವಾಗಿದೆ ಇಂಥ ಸಮಯದಲ್ಲಿ ನಮ್ಮ ಕಷ್ಟಗಳನ್ನು ಕಂಡು ದಿನಸಿ ಕಿಟ್ ನೀಡಿದ ಭಗತ್ ಕ್ರಾಂತಿ ಸೇನೆಗೆ ಅಭಿನಂದನೆಗಳನ್ನು ಸಲ್ಲಿಸಿದರು

 

ಇದೇ ಸಂದರ್ಭದಲ್ಲಿ ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದ ವಿಷ್ಣುವರ್ಧನ್, ಭಗತ್ ಕ್ರಾಂತಿ ಸೇನೆ ಪದಾಧಿಕಾರಿಗಳಾದ ಆರಾಧ್ಯ, ಚೇತನ್ ,ನಾಗೇಶ್, ಪ್ರವೀಣ್ ಸೇರಿದಂತೆ ಇತರರು ಹಾಜರಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!