ಕರೋನ ಯೋಧರಿಗೆ ಕೃತಜ್ಞತೆ ಸಲ್ಲಿಸಿದ ಬಿ ಸುರೇಶ್ ಗೌಡ

 

ತುಮಕೂರು ತಾಲ್ಲೂಕು, ಗೂಳೂರು ಹೋಬಳಿ, ಹೊಳಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವಿಡ್ ಯೋಧರಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೋರೊನ ಬಾಧಿತ ಕುಟುಂಬಳಿಗೆ ಆಹಾರ ಕಿಟ್ ಹಾಗೂ ತರಕಾರಿಯನ್ನು ಹುಳ್ಳೇನಹಳ್ಳಿ ಆಂಜೀನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಮಾಜಿ ಶಾಸಕರು ಹಾಗೂ ಬಿ.ಜೆ.ಪಿ. ಜಿಲ್ಲಾದ್ಯಕ್ಷರಾದ ಬಿ.ಸುರೇಶ್ ಗೌಡ ರವರು ವಿತರಿಸಿದರು.

 

ಈ ಸಂಧರ್ಭದಲ್ಲಿ ಮಾತನಾಡಿದ ಬಿ.ಸುರೇಶ್ ಗೌಡ ಕೋರೊನ ಮಹಾಮಾರಿಯ ವಿರುದ್ದ ಯುದ್ದದ ರೀತಿಯಲ್ಲಿ ಸೇವೆಸಲ್ಲಿಸಿದ ಕೊರೊನ ವಾರಿಯರ್ಸ್ಗಳ ಶ್ರಮ ತುಂಬಾ ಶ್ಲಾಘನೀಯ ಎಂದರು. ಕೊರೊನದಿಂದ ನಲುಗಿದ ಕುಟುಂಬಗಳಿಗೆ ಆತ್ಮವಿಶ್ವಾಸ ತುಂಬಿ, ಚಿಕಿತ್ಸೆಗೆ ಸಹಕರಿಸಿ, ಗುಣ ಮುಖರಾಗಲು ಹಗಲಿರುಳು ಶ್ರಮಿಸುತ್ತಿರುವ ಕೋರೋನ ವಾರಿಯರ್ಸ್ಗಳಿಗೆ ಕೃತಜ್ಞತೆ ಸಲ್ಲಿಸಿದರು.

 

ಈ ಸಂದರ್ಭದಲ್ಲಿ ಹೊನ್ನುಡಿಕೆ ಜಿಲ್ಲಾಪಂಚಾಯಿತಿ ಮುಖಂಡರಾದ ಸಿದ್ದೇಗೌಡ, ಗ್ರಾ.ಪಂ, ಅಧ್ಯಕ್ಷರಾದ ಕಲ್ಪನಾನವೀನ್‌ಕುಮಾರ್, ಉಪಾಧ್ಯಕ್ಷರಾದ ಆಂಜನಪ್ಪ, ತಾ.ಪಂ ಮಾಜಿ ಅಧ್ಯಕ್ಷರಾದ ನೀಲಕಂಠಪ್ಪ, ಗ್ರಾ.ಪಂ ಸದಸ್ಯರುಗಳಾದ ಹನುಮೇಗೌಡ, ಶಿವಮೂರ್ತಿ, ಶ್ರೀನಿವಾಸ್, ಗಿರೀಶ್, ನಾರಾಯಣ, ಹನುಮಂತರಾಜು, ಶಶಿಕಿರಣ್, ಕುಮಾರ್, ಅಮೀರ್ ಖಾನ್, ನಾಗಣ್ಣ, ಶಿವಲಿಂಗಯ್ಯ, ಮರಿಗೌಡ್ರು, ನಟರಾಜು ಮುಂತಾದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!