ಡೋಲಾಯಮಾನವಾದ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ನೆರವಾಗಲು ಶಾಸಕರ ಒತ್ತಾಯ.

 

ಕಳೆದ ಒಂದುವರೆ ವರ್ಷದಿಂದ ಕೊರನ ಬೆಂಬಿಡದೆ ಸಾರ್ವಜನಿಕರನ್ನು ಕಾಡುತ್ತಿದೆ ಇದರಿಂದ ಎಲ್ಲಾ ಕ್ಷೇತ್ರಗಳು ಆರ್ಥಿಕವಾಗಿ ಪೆಟ್ಟು ತಿಂದಿದ್ದು ಇದರಂತೆ ಬಹುಮುಖ್ಯವಾದ ಕ್ಷೇತ್ರ ಶಿಕ್ಷಣ ಕ್ಷೇತ್ರವೂ ಕೂಡ ಬಹುದೊಡ್ಡ ಹೊಡೆತ ತಿನ್ನುವ ಮೂಲಕ ಶಿಕ್ಷಕರು ಬೀದಿಗೆ ಬೀಳುವಂತಾಗಿದೆ ಜೀವನ ನಡೆಸಲು ಬಹಳ ಕಷ್ಟಕರವಾಗಿದೆ ಇದನ್ನು ಗಮನಿಸಿದ ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರಾದ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ತುರುವೇಕೆರೆಯ ಶಾಸಕರಾದ ಮಸಾಲೆ ಜಯರಾಮ್, ಸಿರಾ ಕ್ಷೇತ್ರದ ಶಾಸಕ ರಾಜೇಶ್ ಗೌಡ ರವರು ಇಂದು ಬೆಂಗಳೂರಿನಲ್ಲಿಿ ಮುಖ್ಯಮಂತ್ರಿ ಯಡಿಯೂರಪ್ಪ ರವರನ್ನು ಭೇಟಿ ಮಾಡಿ ಶಿಕ್ಷಕರ ಜೀವನ ತೀರ ಕಷ್ಟಕರವಾಗಿದ್ದು ಅವರಿಗೆ ನೆರವಾಗಬೇಕಾಗಿದ್ದು ಸರ್ಕಾರದ ಜವಾಬ್ದಾರಿಯಾಗಿದೆ ಆದ್ದರಿಂದ ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದಾರೆ.

 

ಕಳೆದ ಒಂದುವರೆ ವರ್ಷದಿಂದ ಶಿಕ್ಷಕರಿಗೆ ವೇತನ, ಕೆಲಸ ಇಲ್ಲದೆ ಶಿಕ್ಷಕರ ಜೀವನ ಕಷ್ಟಕರವಾಗಿದ್ದು ಇನ್ನಾದರೂ ಸರ್ಕಾರ ಗಮನ ಹರಿಸುವುದೇ ಎಂದು ಕಾದು ನೋಡಬೇಕಿದೆ ??

Leave a Reply

Your email address will not be published. Required fields are marked *

You cannot copy content of this page

error: Content is protected !!