ಗೋಣಿಬೀಡು ದಲಿತ ಯುವಕನ ಪ್ರಕರಣ ಸೇವೆಯಿಂದ ಇನ್ಸ್ಪೆಕ್ಟರ್ ವಜಾಕ್ಕೆ ಜಮೀರ್ ಅಹಮದ್ ಒತ್ತಾಯ

 

ಕಳೆದವಾರ ಚಿಕ್ಕಮಂಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದಲಿತ ಯುವಕನೊಬ್ಬನಿಗೆ ಠಾಣೆಯ ಇನ್ಸ್ಪೆಕ್ಟರ್ ರವರು ಯುವಕನಿಗೆ ಮೂತ್ರ ಕುಡಿಸಿದ್ದ ಘಟನೆಗೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಜಮೀರ್ ಅಹಮದ್ ರವರು

ಘಟನೆಗೆ ಕಾರಣರಾದ ಇನ್ಸ್ಪೆಕ್ಟರ್ ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

 

ಯುವಕನೊಬ್ಬ ವಿಚಾರಣೆಯ ನೆಪದಲ್ಲಿ ಠಾಣೆಗೆ ಕರೆಸಿಕೊಂಡ ಇನ್ಸ್ಪೆಕ್ಟರ್ ರವರು ಯುವಕನನ್ನು ಮನಸೋಇಚ್ಛೆ ಕಳಿಸಿ ಎನ್ಕೌಂಟರ್ ಮಾಡುವೆ ಎಂದು ಹೆದರಿಸಿ ಯುವಕನಿಗೆ ಮೂತ್ರ ಕುಡಿಸಿ ಹೇಯ ಕೃತ್ಯ ಎಸಗಿರುವ ಇನ್ಸ್ಪೆಕ್ಟರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು ಸೇವೆಯಿಂದ ವಜಾ ಮಾಡಬೇಕು .ಇದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆಗೆ ಸಾಕ್ಷಿಯಾಗಿದೆ . ಆದ್ದರಿಂದ ಇನ್ಸ್ಪೆಕ್ಟರ್ ಅವರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು ಹಾಗೂ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

 

ಇನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಂತೆ ಇಂದು ಸರ್ಕಾರ ನಡೆಯುತ್ತಿಲ್ಲ ಇದು ದಲಿತವಿರೋಧಿ, ಮುಸ್ಲಿಂ ವಿರೋಧಿ ನೀತಿಯಾಗಿದೆ . ಮುಂದೆ ಆ ದಲಿತ ಯುವಕನಿಗೆ ಆದ ಘಟನೆ ಮುಂದೆ ಎಲ್ಲರಿಗೂ ಆಗುವುದಿಲ್ಲ ಎಂದು ಹೇಗೆ ನಂಬಲು ಸಾಧ್ಯ. ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತು ಕೊಳ್ಳಬೇಕು ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!