ಕರೋನಾಕ್ಕೆ ಮದುಮಗ ಬಲಿ! – ಇಂದು ಮದುವೆ ಆಗಬೇಕಿದ್ದವ ಸಾವಿನ ಮನೆಗೆ

 

 

 

ಕರೋನಾಕ್ಕೆ ಮದುಮಗ ಬಲಿ!

– ಇಂದು ಮದುವೆ ಆಗಬೇಕಿದ್ದವ ಸಾವಿನ ಮನೆಗೆ

– ಎರಡು ಬಾರಿ ಪರೀಕ್ಷೆ ನಡೆಸಿದ್ರು ನೆಗೆಟಿವ್

– ಚಿಕ್ಕಮಗಳೂರಲ್ಲಿ ಕರೋನಾ ಕೇಕೆ..

ಕೊಪ್ಪ: ಕರೋನಾ ಸೋಂಕು ತಗುಲಿ ಇಂದು ಮದುವೆಯಾಗಬೇಕಿದ್ದ ಮದುಮಗ ಜೀವ ಬಿಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.

ಪೃಥ್ವಿರಾಜ್(32) ಕೊರೊನಾ ಸೋಂಕಿಗೆ ಬಲಿಯಾದ ಯುವಕ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ.

ಇಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಪೃಥ್ವಿರಾಜ್, ಬೆಂಗಳೂರಿನಿಂದ ಹತ್ತು ದಿನಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದರು. ಆದರೆ ಇಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವರನ ಅಕಾಲಿಕ ನಿಧನದಿಂದಾಗಿ ಸಂಭ್ರಮ ನೆಲೆಸಬೇಕಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.

ಎರಡು ಬಾರಿ ಪರೀಕ್ಷೆ: ಪೃಥ್ವಿರಾಜ್ ಎರಡು ಬಾರಿ ಕರೋನಾ ಟೆಸ್ಟ್ ಮಾಡಿಸಿದ್ದರು. ಎರಡು ಸಲವೂ ನೆಗೆಟಿವ್ ಬಂದಿತ್ತು. ಆದ್ರೆ ತೀವ್ರ ಉಸಿರಾಟದ ತೊಂದರೆ ಮತ್ತು ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

 

Leave a Reply

Your email address will not be published. Required fields are marked *

You cannot copy content of this page

error: Content is protected !!