ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಓರ್ವ ನಾಲಾಯಕ್- ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಾಗ್ದಾಳಿ

 

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಓರ್ವ ನಾಲಾಯಕ್ , ಅಲ್ಲಿನ ಜನ ಸಂಸದರನ್ನಾಗಿ ಮಾಡಿರುವುದು ದುರಂತ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು .

 

ಕಾಂಗ್ರೆಸ್ ನವರು ತಲೆ ಹಿಡುಕರು ಎಂಬ ನಳಿನ್ ಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಭವನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಳಿನ್ ಕುಮಾರ್ ತಲೆ ಹಿಡಿದು ರಾಜ್ಯಾಧ್ಯಕ್ಷರಾಗಿದ್ದಾರೆ .

 

ಅವ್ರು ಒಬ್ಬ ನಾಲಾಯಕ್ , ದುರಂತ ಅಲ್ಲಿನ ಜನ ಸಂಸದರನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು . ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಪಕ್ಷವನ್ನು ತಲೆಹಿಡುಕ ಪಕ್ಷ ಎಂದು ಎರಡನೇ ಬಾರಿ ಹೇಳಿಕೆ ನೀಡುತ್ತಿದ್ದಾರೆ .

 

135 ವರ್ಷದ ಇತಿಹಾಸದ ಪಕ್ಷ , ಜನರಿಗಾಗಿ ತಲೆ ಕೊಟ್ಟಿದ್ದಾರೆ , ಬಲಿದಾನ ನೀಡಿರುವ ಪಕ್ಷ ಕಾಂಗ್ರೆಸ್ , ಆದರೆ ನೀವು ಆ ಕೆಲಸ ಮಾಡಿಯೇ ಬಿಜೆಪಿ ಅಧ್ಯಕ್ಷರಾಗಿರೋದು . ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಆಪರೇಷನ್ ಕಮಲ ಮಾಡಿ ಬಾಂಬ್ ನಲ್ಲಿ ಶಾಸಕರಿಗೆ ಏನು ಕೊಟ್ಟಿದ್ದೀರಿ . ಅವರೇಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ .. ? ನಿಮ್ಮ ವೇಷ ಹಾಕುವ ಬಟ್ಟೆ ನೋಡ್ತಿದ್ರೆ ಗೊತ್ತಾಗಿದೆ . ನಿಮ್ಮ ಭಾಷೆ ನಿಮ್ಮ ಸಂಸ್ಕೃತಿ ತೋರಿಸುತ್ತಿದೆ . ಯಾವ ಆಧಾರದ ಮೇಲೆ ಈ ಹೇಳಿಕೆ ನೀಡುತ್ತಿದ್ದೀರಾ . ? ನಿಮ್ಮ ಯೋಗ್ಯತೆಯನ್ನು ಜನರು ನೋಡುತ್ತಿದ್ದಾರೆ . ಸೋಲು ಗೆಲುವು ಇರಬಹುದು ಆದರೆ ಶಾಶ್ವತವಾಗಿ ಬಿಜೆಪಿ ಅಧಿಕಾರದಲ್ಲಿ ಉಳಿಯೋಕೆ ಆಗಲ್ಲ ಎಂದರು . ನಿಮ್ಮದೇ ಸರ್ಕಾರಕ್ಕೆ ರಂಧ್ರ ಕೊರೆಯುತ್ತಿರುವವರು ಯಾರು ? ನಿಮ್ಮ ಸರ್ಕಾರದಲ್ಲಿ ಒಂದು ಹೆಣ್ಣು ಮಗುವಿಗೆ ನ್ಯಾಯ ಕೊಡಿಸಲು ಆಗಲಿಲ್ಲ . ಪಿಪಿಇ ಕಿಟ್ ಹಾಕಿಸಿ ಮಲಗಿಸಿ ಶಾಸಕನನ್ನು ರಕ್ಷಿಸುತ್ತೀರಿ . ಅಧ್ಯಕ್ಷ ಸ್ಥಾನಕ್ಕೆ ನೀನೊಬ್ಬ ನಾಲಾಯಕ್ . 107 ಬಿಜೆಪಿ ಸಂಸದರ ಮೇಲೆ ಹೆಣ್ಣು ಮಕ್ಕಳ ಆರೋಪದ ಕೇಸ್ ಗಳಿದೆ . ಇದರಿಂದ ರಾಜ್ಯಕ್ಕೆ ಮಾನಮರ್ಯಾದೆ ಹೋಗ್ತಿದೆ . ಬಿಜೆಪಿ ಹೈಕಮಾಂಡ್ ಇಂತದ್ದನ್ನ ಗಮನಿಸಬೇಕು ಎಂದು ಆಗ್ರಹಿಸಿದರು .

Leave a Reply

Your email address will not be published. Required fields are marked *

You cannot copy content of this page

error: Content is protected !!