ಬಸ್ ನಿಲ್ದಾಣದಿಂದ ಬಾಲಕಿ ನಾಪತ್ತೆ ಪೋಷಕರಿಂದ ದೂರು ದಾಖಲು.

ಬಸ್ ನಿಲ್ದಾಣದಿಂದ ಬಾಲಕಿ ನಾಪತ್ತೆ ಪೋಷಕರಿಂದ ದೂರು ದಾಖಲು.

 

 

 

ತುಮಕೂರು – ಕೂಲಿ ಕೆಲಸಕ್ಕಾಗಿ ಹೊರಟಿದ್ದ ತಾಯಿಯ ಜೊತೆ ಇದ್ದ ಬಾಲಕಿ ಒಬ್ಬಳು ಹಾಡುಹಗಲೇ ಬಸ್ ನಿಲ್ದಾಣದಿಂದ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

 

 

 

 

 

ಇನ್ನು ಘಟನೆ ತುಮಕೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಜನವರಿ 4ರಂದು ಮಧ್ಯಾಹ್ನ ನಡೆದಿದ್ದು ಹಿರಿಯೂರು ಮೂಲದ ಪೋಷಕರೊಂದಿಗೆ ಬಂದಿದ್ದ ಬಾಲಕಿ ಮದ್ದೂರಿಗೆ ಹೊರಡುವ ಸಂದರ್ಭದಲ್ಲಿ ತುಮಕೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಇಳಿದಿದ್ದರು.

 

 

 

 

ಬಸ್ ನಿಲ್ದಾಣದಲ್ಲಿ ಇದ್ದ ಬಾತ್ರೂಮ್ಗೆ ತೆರಳಿದ್ದ ತಾಯಿ ಹಾಗೂ ಮಗಳು. ಇದೇ ಸಂದರ್ಭದಲ್ಲಿ ನಿಗೂಢವಾಗಿ ಕಣ್ಮರೆಯಾಗಿರುವ ಮಗಳನ್ನು ಹುಡುಕಿ ಕೊಡುವಂತೆ ನೊಂದ ತಾಯಿ ತುಮಕೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

 

 

 

 

ಇನ್ನು ಘಟನೆಗೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ನಾಪತ್ತೆಯಾಗಿರುವ ಬಾಲಕಿಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!