ಮಾನಸಿಕ ಅಸ್ವಸ್ಥ ತಾಯಿಯಿಂದ ಆರು ವರ್ಷದ ಮಗು ಕೊಲೆ ತುಮಕೂರಿನಲ್ಲಿ ಘಟನೆ

ಮಾನಸಿಕ ಅಸ್ವಸ್ಥ ತಾಯಿಯಿಂದ ಆರು ವರ್ಷದ ಮಗು ಕೊಲೆ ತುಮಕೂರಿನಲ್ಲಿ ಘಟನೆ.

 

 

ತುಮಕೂರು _ ಮಾನಸಿಕ ಅಸ್ವಸ್ಥ ತಾಯಿಯು ಹೆತ್ತ ಮಗುವನ್ನು ನಿಗೂಢವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಶಾಂತಿನಗರದಲ್ಲಿ  ಶುಕ್ರವಾರ ನಡೆದಿದೆ.

 

 

 

ತುಮಕೂರಿನ ಬನಶಂಕರಿ ಬಳಿಯ ಖಾಸಗಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ತನ್ವಿತ (6)ಎಂಬ ಬಾಲಕಿಯನ್ನು ಹೆತ್ತ ತಾಯಿಯಿಂದ ಕೊಲೆಯಾಗಿರುವ ಮಗು. ಇನ್ನು ಮಗುವನ್ನ ಕೊಲೆ ಮಾಡಿರುವ ತಾಯಿ ಹೇಮಲತಾ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥೆಯಾಗಿದ್ದು ಹಲವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೃತಪಟ್ಟ ಮಗುವಿನ ತಂದೆ ಕುಮಾರ್ ತಿಳಿಸಿದ್ದಾರೆ.

 

 

ಮೃತ  ಮಗುವಿನ ತಂದೆ ಗುಬ್ಬಿ ತಾಲೂಕಿನಲ್ಲಿ ಶಿಕ್ಷಕನಾಗಿ  ಕೆಲಸ ನಿರ್ವಹಿಸುತ್ತಿದ್ದು ಎಂದಿನಂತೆ ಇಂದು ಕೆಲಸಕ್ಕೆ ತೆರಳಿದ್ದ ತಂದೆಗೆ ಕೊಲೆ ಮಾಡಿರುವ ತಾಯಿಯೇ ಗಂಡನಿಗೆ ಶೀಘ್ರ ಬರುವಂತೆ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಅನುಮಾನ ಕೊಂಡ ಕುಮಾರ್ ಸ್ನೇಹಿತರನ್ನು ಮನೆಗೆ ಕಳುಹಿಸಿದಾಗ ಘಟನೆ ಬೆಳಕಿಗೆ ಬಂದಿದೆ.

 

 

 

ಇನ್ನು ಕೊಲೆ ಮಾಡಿರುವ ತಾಯಿ ಯಾವುದೇ ಪಶ್ಚಾತಾಪವಿಲ್ಲದೆ ಮಗುವನ್ನ ಕೊಲೆ ಮಾಡಿ ಮನೆಯಲ್ಲಿ ಮಲಗಿಸಿ ವಿಕೃತಿ ಮೆರೆದಿದ್ದು ಸ್ಥಳೀಯ ನಿವಾಸಿಗಳಲ್ಲೂ ತೀವ್ರ ಆಕ್ರೋಶ ತಂದೊಡ್ಡಿತ್ತು. ಘಟನೆ ತಿಳಿದ ಕೂಡಲೇ ತುಮಕೂರಿನ ಜಯನಗರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೊಲೆ ಮಾಡಿರುವ ತಾಯಿಯನ್ನು ಬಂಧಿಸಿದ್ದಾರೆ.

 

 

 

 

ಇನ್ನು ಪುಟ್ಟ ಮಗುವಿನ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮನೆಯ ಮುಂದೆ ಜಮಾಯಿಸಿದ್ದರು.

 

 

 

ಸ್ಥಳದಲ್ಲೇ ಭಾವುಕರಾದ ಆರಕ್ಷಕ ಸಿಬ್ಬಂದಿಗಳು.

 

 

ಪುಟ್ಟ ಮಗುವಿನ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಆರಕ್ಷಕ ಸಿಬ್ಬಂದಿಗಳು ಮಗುವಿನ ಸ್ಥಿತಿಯನ್ನು ಕಂಡು ಕಣ್ಣೀರು ಹಾಕಿದ ಘಟನೆ ಸಹ ಎದ್ದು ಎಲ್ಲರ ಮನಸ್ಸು ಕಲಕುವಂತಿತ್ತು.

 

 

ಮೃತ ಮಗುವಿನ ಪ್ರಾರ್ಥಿವ ಶರ್ವ ಶರೀರವನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!