ಕುಡಿದ ಅಮಲಿನಲ್ಲಿ ಕೆಟ್ಟು ನಿಂತಿದ್ದ ವಾಹನಕ್ಕೆ ಹಿಂದಿನಿಂದ ಕಾರು ಡಿಕ್ಕಿ

ಕುಡಿದ ಅಮಲಿನಲ್ಲಿ ಕೆಟ್ಟು ನಿಂತಿದ್ದ ವಾಹನಕ್ಕೆ ಹಿಂದಿನಿಂದ ಕಾರು ಡಿಕ್ಕಿ

ದೇವನಹಳ್ಳಿ:ಕಾರು ಡಿಕ್ಕಿಯಾದ ಪರಿಣಾಮ ಪರಿಶೀಲನೆ ಮಾಡಲು ಬಂದಿದ್ದ ಕಾನ್ಸಟೇಬಲ್ ಸಾವು,ಇನ್ಸಪೇಕ್ಟರ್ ಕೂದಲಳತೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು. ಏರ್ಪೋಟ್ ರಸ್ತೆ ಚಿಕ್ಕಜಾಲ ಬಳಿ ಘಟನೆ ನಡೆದಿದ್ದು,ದೇವನಹಳ್ಳಿ ಪೊಲೀಸ್ ಠಾಣೆಯ ಪಿ.ಸಿ ಸುರೇಶ್ ಮೃತ ದುರ್ದೈವಿಯಾಗಿದ್ದಾರೆ.

 

ರಾತ್ರಿ ನೈಟ್ ರೌಂಡ್ಸ್ ಮಾಡ್ತಿದ್ದ ದೇವನಹಳ್ಳಿ ಇನ್ಸ್ಪೆಕ್ಟರ್ ಧರ್ಮೆಗೌಡ ಮತ್ತು ಜೀಪ್ ಡ್ರೈವರ್ ಸುರೇಶ್ ಈ ವೇಳೆ ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಕಾರು ಹೀಗಾಗಿ ಏನಾಗಿದೆ ಎಂದು ಚಾಲಕನ ಸಹಾಯಕ್ಕೆ ಹೋಗಿದ್ದ ಇನ್ಸಪೇಕ್ಟರ್ ಮತ್ತು ಪಿಸಿ.

 

 

 

ಆದ್ರೆ ಇದೇ ಸಮಯದಲ್ಲಿ ಪೋನ್ ಕಾಲ್ ಮಾತನಾಡಲು ಸೈಡಿಗೆ ಹೋಗಿದ್ದ ಇನ್ಸಪೇಕ್ಟರ್ ಧರ್ಮೆಗೌಡ ಬಚಾವ್ ಆಗಿದ್ದಾರೆ.ಈ ವೇಳೆ ಕಂಠಪೂರ್ತಿ ಕುಡಿದ ಬಂದು ಇನ್ನೂವಾ ಕಾರಿಗೆ ಅಸೆಂಟ್ ಕಾರಿನಿಂದ ಡಿಕ್ಕಿ,ಮೂವರು ಯುವಕರು ಮೂವರು ಯುವತಿಯರಿದ್ದ ಕಾರು,ರಾತ್ರಿಯೆಲ್ಲ ಪಾರ್ಟಿ ಮಾಡಿಕೊಂಡು ಮುಂಜಾನೆ ನಂದಿಬೆಟ್ಟಕ್ಕೆ ತೆರಳಲು ಬರ್ತಿದ್ದ ಯುವಕ ಯುವತಿಯರು, ಅಪಘಾತದ ರಬಸಕ್ಕೆ ಪಿಸಿ ದುರ್ಮರಣ ಕೆಟ್ಟು ನಿಂತಿದ್ದ ಕಾರು ಚಾಲಕನ ಕೈ ಕಾಲು ಮುರಿತ.

 

ಕುಡಿದ ಮತ್ತಿನಲ್ಲಿದ್ದ ಯುವಕ ಯುವತಿಯರಿಗೂ ಗಂಭೀರ ಗಾಯ.ಪೊಲೀಸ್ ಪೇದೆ ಸುರೇಶ್ ದುರ್ಮರಣಕ್ಕೆ ಪೊಲೀಸರ ಕಂಬನಿ ಮಿಡಿದಿದ್ದಾರೆ,ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಬಳಿ ಘಟನೆಯಾಗಿದೆ.

 

ಮಂಜು ಬೂದಿಗೆರೆ

9113813926

Leave a Reply

Your email address will not be published. Required fields are marked *

You cannot copy content of this page

error: Content is protected !!