ಲೋಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದ ಲೆಕ್ಕಾಧಿಕಾರಿ ವರ್ಗಾವಣೆ :- ರೈತ ಮುಖಂಡರಿoದ ಅಸಮಾಧಾನ

ಲೋಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದ ಲೆಕ್ಕಾಧಿಕಾರಿ ವರ್ಗಾವಣೆ :- ರೈತ ಮುಖಂಡರಿoದ ಅಸಮಾಧಾನ

 

 

 

 

 

 

ಹನೂರು :- ತಾಲೂಕಿನ ಲೋಕ್ಕನಹಳ್ಳಿ ಗ್ರಾಮದಲ್ಲಿ ಇರುವ ರೈತ ಸಂಪರ್ಕ ಕೇಂದ್ರದಲ್ಲಿ ಸುಮಾರು ಎರಡು ವರ್ಷಗಳಿಂದ ಸೇವೆ ಸಲ್ಲಿಸುತಿದ್ದ ಲೆಕ್ಕಾಧಿಕಾರಿ ಚೇತನ್ ಕುಮಾರ್ ರವರನ್ನು ವರ್ಗಾವಣೆ ಮಾಡಿರುವ ಹಿನ್ನೆಲೆ ಸುತ್ತ ಮುತ್ತಲ ಗ್ರಾಮದ ರೈತ ಮುಖಂಡರು ಚೇತನ್ ರವರ ವರ್ಗಾವಣೆ ವಿರೋಧಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

 

 

 

 

 

 

 

 

 

 

ಇನ್ನು ಇದೆ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಮೇರುಪತಿ. ಲೋಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಂದ ರೈತರು ಕೇಂದ್ರಕ್ಕೆ ಭೇಟಿ ನೀಡಿದಾಗ ಬಹಳ ಆತ್ಮೀಯವಾಗಿ ಮಾತನಾಡಿಸುವ ಜೊತೆಗೆ ರೈತರಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿಸಿಕೊಡುತ್ತಾರೆ ರೈತರು ಸಂದರ್ಭಾನುಸಾರ ಬೆಳೆಯುವ ಬೆಳೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವ ರೈತಸ್ನೆಹಿ ಅಧಿಕಾರಿಯಾಗಿದ್ದರು. ಲೆಕ್ಕಾಧಿಕಾರಿ ಚೇತನ್ ರವರ ದಿಡೀರ್ ವರ್ಗಾವಣೆ ನಮ್ಮ ಸುತ್ತ ಮುತ್ತಲ ಗ್ರಾಮಗಳ ರೈತರಲ್ಲಿ ನೋವುಂಟು ಮಾಡಿದೆ.

 

 

 

 

 

 

 

 

 

 

 

 

ಕೃಷಿ ಇಲಾಖೆ ಸಂಬಂಧ ಪಟ್ಟ ಉನ್ನತ ಅಧಿಕಾರಿಗಳು ದಯಮಾಡಿ ಅವರನ್ನು ನಮ್ಮ ಲೋಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲೇ ಕಾರ್ಯನಿರ್ವಹಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಮಾಡಿದರು ಹಾಗೂ ಚೇತನ್ ರವರ ವರ್ಗಾವಣೆಯನ್ನು ಖಂಡಿಸಿ ರೈತರೆಲ್ಲ ಸೇರಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇನ್ನು ಇದೆ ಸಂದರ್ಭದಲ್ಲಿ ಕಾಮಗೆರೆ ಮಹದೇವು. ಬಸವಣ್ಣ. ಹುತ್ತೂರು ಚಿಕ್ಕಮಾದನಾಯ್ಕ. ಮಾದೇಶ್. ಇನ್ನಿತರರಿದ್ದರು.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!