ಭೀಕರ ಅಪಘಾತ ಆರು ಜನರು ಸ್ಥಳದಲ್ಲಿ ಸಾವು

ಭೀಕರ ಅಪಘಾತ ಆರು ಜನರು ಸ್ಥಳದಲ್ಲಿ ಸಾವು

ನರಸೀಪುರ:- ಮಲೆ ಮಾದೇಶ್ವರ ಬೆಟ್ಟದಿಂದ ಮೈಸೂರಿನ ಕಡೆ ತೆರಳುತ್ತಿದ್ದ ಇನ್ನೋವಾ ಕಾರು ಹಾಗೂ ಮೈಸೂರಿನಿಂದ ಕೊಳ್ಳೇಗಾಲದ ಕಡೆ ಬರುತ್ತಿದ್ದ ಖಾಸಗಿ ಬಸ್ ಗೆ ಕುರುಬೂರು ಸಮೀಪ ಮುಖಾಮುಖಿ ಡಿಕ್ಕಿಯಾಗಿ ಆರು ಜನರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

 

 

 

 

ಇನ್ನು ಭೀಕರ ಅಪಘಾತದಲ್ಲಿ ಸಾವಿಗೀಡಾಗಿರುವವರು ಬಳ್ಳಾರಿ ಮೂಲದವರು ಎಂದು ತಿಳಿದುಬಂದಿದೆ. ಕಬ್ಬು ಕಟಾವು ಮಾಡುವ ಕೂಲಿ ಆರಸಿ ಬಳ್ಳಾರಿಯಿಂದ ಮೈಸೂರಿನ ಕಡೆ ಬಂದಿದ್ದ ಬಡ ಜೀವಿಗಳು ಬಾರದ ಲೋಕಕ್ಕೆ ತೆರಳಿವೆ. ಬಾಡಿಗೆ ವಾಹನದ ಮೂಲಕ ಮಹದೇಶ್ವರ ಬೆಟ್ಟಕ್ಕೆ ದೇವಸ್ಥಾನಕ್ಕೆ ತೆರಳಿ ಪೂಜಿ ಸಲ್ಲಿಸಿ ಮೈಸೂರಿನ ಕಡೆ ಹಿಂತಿರುಗುವಾಗ ನರಸೀಪುರ ತಾಲೂಕಿನ ಕುರುಬೂರು ಸಮೀಪದಲ್ಲಿ ಈ ಘಟನೆ ನಡೆದಿದೆ. ಕಾರು ಸಂಪೂರ್ಣ ನಜ್ಜು ಗುಜ್ಜಗಿದೆ.

 

 

 

 

 

ಕಾರು ಮತ್ತು ಬಸ್ಸು ಅತೀ ವೇಗದ ಚಾಲನೆ ಕಾರಣ ಎಂದು ತಿಳಿದು ಬಂದಿದೆ.ಇನ್ನು ಸ್ಥಳೀಯ ಪೊಲೀಸ್ ಠಾಣಿಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!