ಮಳೆ ಸಹಿತ ಗಾಳಿ ಬಡಿತಕ್ಕೆ ನೆಲಕ್ಕುರುಳಿದ ವಿದ್ಯುತ್ ಕಂಬ ಹಾಗೂ ತಳ್ಳುವ ಗಾಡಿಗೆ ಹಾನಿ 

ಮಳೆ ಸಹಿತ ಗಾಳಿ ಬಡಿತಕ್ಕೆ ನೆಲಕ್ಕುರುಳಿದ ವಿದ್ಯುತ್ ಕಂಬ ಹಾಗೂ ತಳ್ಳುವ ಗಾಡಿಗೆ ಹಾನಿ 

ಹನೂರು :- ತಾಲೂಕಿನ ಶಾಗ್ಯ ಗ್ರಾಮದ ಗ್ರಂಥಾಲಯ ಬಡಾವಣೆಯ ಮುಖ್ಯ ರಸ್ತೆಯ ಬದಿಯಲ್ಲಿದ್ದ ಮರದ ರಂಬೆಗಳು ಮುರಿದು ವಾಲುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆ ಆಗಿದೆ.

 

 

 

 

 

 

 

 

 

ಪತ್ರಕರ್ತ ಶಾಗ್ಯ ನಂದೀಶ್ ಅವರ ಮನೆಯ ಹಿಂಭಾಗ ಹಳ್ಳದ ಬಳಿ ಇದ್ದ ನೀಲಿಗಿರಿ ಮರದ ರಂಬೆ ಮುರಿದು ಬಿದ್ದಿದೆ ಹಾಗೂ ಗ್ರಾಮದ ಬಸ್ ನಿಲ್ದಾಣ ಬಳಿ ಇರಿಸಿದ್ದ ಸುರೇಶ್ ಎಂಬುವವರಿಗೆ ಸೇರಿದ ಪಾನಿಪುರಿ ಅಂಗಡಿ ಪೆಟ್ಟಿಗೆ ಮೆಲ್ಚಾವಣೆಗೆ ಹಾರಿಹೋಗಿದೆ ಹಾಗೂ ಪ್ರೌಢಶಾಲೆ ಸಮೀಪವಿರುವ ಹೊಸ ಬಡಾವಣೆಯಲ್ಲಿ ವಾಸವಿದ್ದ ದೇಶಯ್ಯ ಅವರ ಮನೆ ಮುಂಭಾಗ ಅಳವಡಿಸಿಡಿಸಲಾಗಿದ್ದ ಕಲರ್ ಸೀಟ್ ನೆಲಕ್ಕೆ ಅಪ್ಪಳಿಸಿದೆ.

 

 

 

 

 

 

 

 

 

 

ಬಿರೋಟ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ನೆಲಕ್ಕೆ ಉರುಳಿದೆ. ಎಂದು ತಿಳಿದು ಬಂದಿದೆ. ಇನ್ನು ಬೇಸಿಗೆ ಕಾಲದ ಅವಧಿಯಲ್ಲಿ ಆದ ಗಾಳಿ ಮಳೆಯಿಂದ ತಂಪೆರೇದಿದ್ದು ಗ್ರಾಮದ ಕುಟುಂಬಗಳು ಇತ್ತ ಮಳೆ ಬಂದಿದ್ದಕ್ಕೆ ಖುಷಿ ಪಡುವುದೋ ಹಾನಿಯಾಗಿರುವುದಕ್ಕೆ ದುಃಖ್ಖ ಪಡುವುದೋ ಎಂಬಂತೆ ಹಾಗಿದೆ.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!