ಆನೆ ದಾಳಿ ಓರ್ವನಿಗೆ ಗಾಯ ತಪ್ಪಿದ ಅನಾಹುತ 

ಆನೆ ದಾಳಿ ಓರ್ವನಿಗೆ ಗಾಯ ತಪ್ಪಿದ ಅನಾಹುತ 

ಕೊಳ್ಳೇಗಾಲ :- ತಾಲೂಕಿನ ದೊಡ್ಡಿಂದವಾಡಿ ಸಮೀಪದ ಗುಡ್ಡದ ಮಾರಮ್ಮ ದೇವಸ್ಥಾನದ ಹತ್ತಿರ ಕುಳ್ಳಪ್ಪ ಸನ್ ಆಫ್ ಮಹೇಶ್ ಎಂಬುವ ವ್ಯಕ್ತಿಯು ತಮ್ಮ ಜಮೀನಿನಲ್ಲಿ ಜೋಳದ ಕಡ್ಡಿ ಕಟಾವ್ ಮಾಡಿಕೊಂಡು ಬರಲು ಜಮಿನಿಗೆ ತೆರಳಿದ್ದ ಸಂದರ್ಭದಲ್ಲಿ ಮಹೇಶ್ (23) ಎಂಬ ದೊಡ್ಡಿನ್ದು ವಾಡಿ ಗ್ರಾಮದ ವ್ಯಕ್ತಿಯ ಮೇಲೆ ಆನೆ ದಾಳಿ ಮಾಡಲಾಗಿದ್ದು ಭುಜದ ಭಾಗಕ್ಕೆ ಬಲವಾದ ಪೆಟ್ಟಾಗಿ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

 

 

 

 

 

 

ವ್ಯಕ್ತಿಯು ಕ್ಷಣಮಾತ್ರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾನೆ ನಂತರ ಗುಂಡಲ್ ಜಲಾಶಯ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಆನೆಯನ್ನು ಕಾಡಿಗೆ ಅಟ್ಟುವ ಕೆಲಸ ಮಾಡಿದ್ದಾರೆ

 

ವರದಿ: ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!