ಕಾಲೇಜು ಅಭಿವೃದ್ಧಿಗೆ 50ಲಕ್ಷರು ನೀಡಲಾಗುವುದು. ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ

 

ಇಂದು ಮಾನ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ ಚಿದಾನಂದ್ ಎಂ ಗೌಡ ರವರು ಸಿರಾ ನಗರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಗೆ ಭೇಟಿ ನೀಡಿ ಕುಂದು ಕೊರತೆಗಳ ಕುರಿತು ಉಪನ್ಯಾಸಕರೊಂದಿಗೆ ಚರ್ಚಿಸಿದರು. ಈ ಸುಸಂದರ್ಭದಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು. ಕಾಲೇಜಿನ ಅಭಿವೃದ್ಧಿಗೆ ತಮ್ಮ ನಿಧಿಯಿಂದ 50 ಲಕ್ಷ ನೀಡುವುದಾಗಿ ಘೋಷಿಸಿದ ಚಿದಾನಂದ್ ಎಂ ಗೌಡ ರವರು, ಹಳ್ಳಿಗಳಿಂದ ವಿದ್ಯಾಭ್ಯಾಸ ದೃಷ್ಟಿಯಿಂದ ನಗರಕ್ಕೆ ಬರುವ ಬಾಲಕಿಯರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಶ್ರೀಮತಿ ಮಮತಾ ರವರಿಗೆ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದಾರ್ಥ್ ರವರಿಗೆ ಸೂಚಿಸಿದರು.

 

ಶಾಲಾ ಮಕ್ಕಳು ಹಳ್ಳಿಗಳಿಂದ ಪಟ್ಟಣಕ್ಕೆ ಆಗಮಿಸಲು ಬಸ್ ವ್ಯವಸ್ಥೆ ಒದಗಿಸುವಂತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೇಳಿಕೊಂಡ ತಕ್ಷಣ ಸಾರಿಗೆ ವ್ಯವಸ್ಥಪಕರಾದ ವಿನೋದ್ ರವರನ್ನು ಸ್ಥಳಕ್ಕೆ ಕರೆಸಿ ದಿನನಿತ್ಯ ಅನುಭವಿಸುತ್ತಿರುವ ಸಮಸ್ಯೆ ತಿಳಿಸಿ ಕೂಡಲೇ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಚಂದ್ರಯ್ಯ, ಮಹೇಂದ್ರಪ್ಪ, ಕಂದಾಯ ಅಧಿಕಾರಿಗಳಾದ ಪ್ರದೀಪ್ ರವರು, ನಗರ ಮಂಡಲ ಅಧ್ಯಕ್ಷರಾದ ರಂಗಸ್ವಾಮಯ್ಯ, ಜಿಲ್ಲಾ ಕಾರ್ಯದರ್ಶಿ ರವಿ, ಮದಲೂರು ಗ್ರಾಮ ಪಂಚಾಯತಿ ಯಾದವ ಮುಖಂಡರಾದ ಈರಣ್ಣ, ತಾ. ಮಾಜಿ ಅಧ್ಯಕ್ಷರಾದ ಚಿಕಣ್ಣ, ವಾಚ್ ಉಮೇಶಣ್ಣ, ಸಿಗಲಹಳ್ಳಿ ಎಸ್.ಜೆ ರವಿಯಣ್ಣ, ಸುಬ್ರಮಣ್ಯ ಸ್ವಾಮಿ, ನಾಗರಾಜು, ಗೋವಿಂದಪ್ಪ, ಈಶ್ವರಯ್ಯ, ಉಪನ್ಯಾಸಕರು ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!