ವೃತ್ತಕ್ಕೆ ಎಚ್ ಎಂ ಜಿ ಹೆಸರಿಡಲು ದಲಿತ ಸಂಘಟನೆಗಳಿಂದ ಒತ್ತಾಯ.Dalit Organization’s insist on naming the circle.

ವೃತ್ತಕ್ಕೆ ಎಚ್ ಎಂ ಜಿ ಹೆಸರಿಡಲು ದಲಿತ ಸಂಘಟನೆಗಳಿಂದ ಒತ್ತಾಯ

 

ತುಮಕೂರು ನಗರದ ಗುಬ್ಬಿ ಗೇಟ್ ಹತ್ತಿರ ಇರುವ ಹಳೆ ಚೆಕ್ಪೋಸ್ಟ್ ವೃತ್ತಕ್ಕೆ .ಕರ್ನಾಟಕ ರಾಜ್ಯದ ಶಿಕ್ಷಣ ಸಂಸ್ಥೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ನೀಡಿರುವ ಶಿಕ್ಷಣ ಭೀಷ್ಮ ಎಚ್ಎಂ ಗಂಗಾಧರಯ್ಯನವರು ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಬೇಕೆಂದು ಅಖಿಲ ಭಾರತ ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಚಲವಾದಿ ಮಹಾಸಭಾದಿಂದ ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಆಯುಕ್ತರಿಗೆ ಸಂಘಟನೆಗಳಿಂದ ಒತ್ತಾಯ.

 

 

ತುಮಕೂರು ಹಾಗೂ ಗುಬ್ಬಿ ರಸ್ತೆಯಲ್ಲಿ ಬರುವ ವೃತ್ತಕ್ಕೆ ಹೆಚ್ಎಂಗಂಗಾಧರಯ್ಯನವರು ಹೆಸರು ನಾಮಕರಣ ಮಾಡುವ ಮೂಲಕ ಅವರ ಹೆಸರನ್ನು ಶಾಶ್ವತವಾಗಿ ಉಳಿಸಲು ಗುಬ್ಬಿ ಗೇಟ್ ನ ಚೆಕ್ಪೋಸ್ಟ್ ವೃತ್ತಕ್ಕೆ ಹೆಸರನ್ನ ನಾಮಕರಣ ಮಾಡಬೇಕಾಗಿ ಮೇಯರ್ ಹಾಗೂ ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ ಎಂದು ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಿಗೆ ನಿಧಿ ಕುಮಾರ್ ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಅಧ್ಯಕ್ಷರು ನಿಧಿ ಕುಮಾರ್ ,ಚಲವಾದಿ ಮಹಾಸಭಾ ರಾಜ್ಯ ನಿರ್ದೇಶಕರಾದ ಟಿ ಆರ್ ನಾಗೇಶ್, ಚಲವಾದಿ ಮಹಾಸಭಾ ನಗರ ಅಧ್ಯಕ್ಷರಾದ ಹೆಗ್ಗೆರೆ ಕೃಷ್ಣಪ್ಪ, ಉಪಾಧ್ಯಕ್ಷರಾದ ಸಿದ್ದಲಿಂಗಯ್ಯ, ಗೋವಿಂದ್ ರಾಜು ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!