ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಕೈ ಹಾಕಿದ್ರೇ ಕಾಂಗ್ರೆಸ್ ಸತ್ಯನಾಶ ಮಾಡಿದಂತೆ: ಬಿಸಿ ಪಾಟೀಲ್

ಎಂ.ಬಿ ಪಾಟೀಲ್ ಒಮ್ಮೆ ಕೈ ಸುಟ್ಟು ಕೊಂಡಿದ್ದರು, ಇದೀಗ ಮತ್ತೇ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಕೈ ಹಾಕಿದ್ರೇ ಕಾಂಗ್ರೆಸ್ ಸತ್ಯನಾಶ ಮಾಡಿದಂತೆ: ಬಿಸಿ ಪಾಟೀಲ್ದಾವಣಗೆರೆ:- ಎಂ.ಬಿ ಪಾಟೀಲ್ ಒಮ್ಮೆ ಕೈ ಸುಟ್ಟು ಕೊಂಡಿದ್ದರು, ಇದೀಗ ಮತ್ತೇ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಕೈ ಹಾಕಿದ್ರೇ ಕಾಂಗ್ರೆಸ್ ಸತ್ಯನಾಶ ಮಾಡಿದಂತೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಎಂ.ಬಿ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು ಇವತ್ತು ನಮ್ಮ ಗೃಹ ಮಂತ್ರಿಗಳು ಜಿಲ್ಲೆಗೆ ಬರ್ತಿದ್ದಾರೆ ಅದಕ್ಕೆ ನಾವು ಬಂದಿದ್ದೇವೆ, ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರವಾಗಿದ್ದು, ಸದ್ಯಕ್ಕೆ ನಮ್ಮದರಲ್ಲಿ ಯಾವುದೇ ಅಸಮಾಧಾನ ಇಲ್ಲ ಸಮಾಧಾನ ಇದೆ, ಒಂದು ಕುಟುಂಬ ಅಂದ ಮೇಲೆ ಅಸಮಾನಧಾನ ಇದ್ದೆ ಇರುತ್ತೆ, ಮನೆಯಲ್ಲಿ ಎಲ್ಲಾ ಮಕ್ಕಳು ಒಂದೇ ತರ ಇರುವುದಿಲ್ಲ.ವಿಸ್ತರಣೆ ಬಗ್ಗೆ ಸಿಎಂ ಅವರನ್ನೇ ಕೇಳಿ ಎಂದರು. ಎಂ.ಬಿ ಪಾಟೀಲ್ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ವಿಚಾರವಾಗಿ ಮಾತನಾಡಿದ ಅವರು ಎಂ.ಬಿ ಪಾಟೀಲ್ ಒಮ್ಮೆ ಕೈ ಸುಟ್ಟು ಕೊಂಡು ಕಾಂಗ್ರೆಸ್ ಸತ್ಯನಾಶ ಮಾಡಿದ್ದಾರೆಮತ್ತೆ ಮುಂದುವರೆದರೆ ಪೂರ್ಣ ಸರ್ವನಾಶವಾಗಿ ಆಗುತ್ತೆ, ಅರುಣ್ ಸಿಂಗ್ ಬಿಜೆಪಿ ಏಜೆಂಟ್ ಎಂಬ ಹೆಚ್ ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಹೆಚ್ ಡಿಕೆ ಅವರಿಗೆ ನಾಲಿಗೆ ಮೇಲೆ‌ ಹಿಡಿತವಿಲ್ಲ. ಪಕ್ಷ ಸಂಘಟನೆ ಮಾಡೋದಕ್ಕೆ ಬಂದವರನ್ನ ಹಣ ಪಡೆಯಲು ಬಂದವರು ಎಂದು ಹೇಳುವುದು ಅರ್ಥಹೀ‌ನ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!