ಕೊರಟಗೆರೆ – ಮೃತ ರೈತ ಕುಟುಂಬಕ್ಕೆ ಧನಸಹಾಯ.financial help by leader

  • ಕೊರಟಗೆರೆ – ಮೃತ ರೈತ ಕುಟುಂಬಕ್ಕೆ ಧನಸಹಾಯ.

ಉಪಮುಖ್ಯಮಂತ್ರಿ ಮತ್ತು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಜಿ ಪರಮೇಶ್ವರ್ ರವರ ಸ್ವಕ್ಷೇತ್ರದಲ್ಲಿ ಇತ್ತೀಚೆಗಷ್ಟೆ  ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿತ್ತು .

ಸಾಲದ ಬಾಧೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಪಣ್ಣೇನಹಳ್ಳಿ ರೈತ ಅಂಜಿನಪ್ಪ ಕುಟುಂಬಕ್ಕೆ ಕೊರಟಗೆರೆ ಗೆಳೆಯರ ಬಳಗದ ಅಧ್ಯಕ್ಷ ಮಂಜುನಾಥ್ ಬುಧವಾರ ಸಂಜೆ ಸ್ವಾಂತನ ತಿಳಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಪಣ್ಣೇನಹಳ್ಳಿ ಗ್ರಾಮದಲ್ಲಿ ಸಾಲದ ಬಾಧೆಯಿಂದ ಮೃತಪಟ್ಟ ರೈತ ಅಂಜಿನಪ್ಪನವರ ಮನೆಗೆ ತೆರಳಿ ಕುಟುಂಬಕ್ಕೆ ಆರ್ಥಿಕವಾಗಿ ಧನಸಹಾಯ ಮಾಡಿ ಕುಟುಂಬದ ಜೊತೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.

ಕೊರಟಗೆರೆ ಗೆಳೆಯರ ಬಳಗದ ಅಧ್ಯಕ್ಷ ಮಂಜುನಾಥ್ ಮಾತನಾಡಿ ಮುಂಗಾರು ಮಳೆ ಇಲ್ಲದೇ ಕೆರೆಕಟ್ಟೆಗಳು ಖಾಲಿಯಾಗಿವೆ ರೈತ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ತಾನು ಮಾಡಿದ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.ಕಂದಾಯ ಮತ್ತು ಕೃಷಿ ಇಲಾಖೆ ತಕ್ಷಣ ಸರ್ಕಾರದಿಂದ ಬರುವ ಪರಿಹಾರವನ್ನು ಕೊಡಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ತಾ.ಪಂ.ಸದಸ್ಯ ಎಲ್.ವಿ.ಪ್ರಕಾಶ್ .ವಿ.ಎಸ್.ಎಸ್.ಎನ್ ಅಧ್ಯಕ್ಷ ಮರುಡಪ್ಪ. ಮುಖಂಡರಾದ ಸಂಜೀವರೆಡ್ಡಿ .ಚನ್ನರೆಡ್ಡಿ.ಕಾಕಿಮಲ್ಲಣ್ಣ. ರಮೇಶ್ .ನಾಗರಾಜು. ರೇಣುಕಾಪ್ರಸಾದ್.ಮಾರುತಿ.ಕೃಷ್ಣಪ್ಪ .ಕುಮಾರ್. ಶಿವಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!