ನಾಗರಕಟ್ಟೆಯ ಮೂರನೇ ವರ್ಷದ ವಾರ್ಷಿಕೋತ್ಸವ

ಕೊರಟಗೆರೆ – ಪಟ್ಟಣದ ಮಧ್ಯ ಬಸ್ ನಿಲ್ದಾಣದ ಬಳಿ ಇರುವ ಶ್ರೀ ನಾಗರಕಟ್ಟೆ ಸೇವಾ ಸಮಿತಿ (ರಿ) .ವತಿಯಿಂದ ಇಂದು ಬೆಳಿಗ್ಗೆ 7-51 ರಿಂದ 8-30 ರೊಳಗೆ ಸಲ್ಲುವ ಕುಂಬ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ನಾಗರಕಟ್ಟೆಯ ಮೂರನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇಂದು ಬೆಳಿಗ್ಗೆ 7- 51 ಕ್ಕೆ ಹೋಮ .ಪಂಚಾಮೃತ ಅಭಿಷೇಕ ಹಾಗೂ ಮಹಾಮಂಗಳಾರತಿ .ಲೋಕಕಲ್ಯಾಣಾರ್ಥವಾಗಿ ಭಕ್ತಾದಿಗಳಿಂದ ಕ್ಷೀರಾಭೀಷೇಕ ಮಾಡಲಾಯಿತು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಕಾರ್ಯಕ್ರಮಕ್ಕೆ ಶ್ರೀ ನಾಗರಕಟ್ಟೆ ಸೇವಾ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ .ಉಪಾಧ್ಯಕ್ಷರಾದ ನಾರಯಣಪ್ಪ .ಗೌರವಾಧ್ಯಕ್ಷರಾದ ಪವನ್ ಕುಮಾರ್ .ಕಾರ್ಯದರ್ಶಿಯಾದ ರಾಮಣ್ಣ .ಸಹಕಾರ್ಯದರ್ಶಿಯಾದ ಜಯರಾಮ್ .ಖಜಾಂಚಿ ರಂಗರಾಜು .ಹಾಗೂ ಸದಸ್ಯರುಗಳು ಭಾಗವಹಿಸಿದ್ದರು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು .

Leave a Reply

Your email address will not be published. Required fields are marked *

You cannot copy content of this page

error: Content is protected !!